ಇಲವಾಲ ಪೊಲೀಸ್ ಠಾಣಾ ಸರಹದ್ದು ಜೆಟ್ಟಿಹುಂಡಿ ಗ್ರಾಮದಲ್ಲಿನ ಪ್ರತ್ಯಂಗಿರ ದೇವಸ್ಥಾನದಲ್ಲಿ ಆಡಳಿತ ಮಂಡಳಿಯವರು ಕೋಳಿಯನ್ನು ಹಿಂಸಾತ್ಮಕವಾಗಿ ಬಲಿಯನ್ನು ನೀಡಿ ಬಲಿ ಕೊಟ್ಟ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಪಿರಿಯಾ ಪಟ್ಟಣ ಪೊಲೀಸ್ ಠಾಣಾ ಸರಹದ್ದು ಅವರೆಕಾಯಿ ಗುಡ್ಡದ ಕಾವಲ್ ಗ್ರಾಮದಲ್ಲಿ ಪಿರ್ಯಾದಿರವರ ಜಮೀನಿನಲ್ಲಿ ಆರೋಪಿತರುಗಳು ಯಾರೋ ಸುಮಾರು 60 ಸಾವಿರ ರೂ ಮೌಲ್ಯದ ವಸ್ತುಗಳನ್ನು ಹಾನಿ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಬೈಲಕುಪ್ಪೆ ಪೊಲೀಸ್ ಠಾಣಾ ಸರಹದ್ದು ಚೌಡಿಕಟ್ಟೆ ಬಳಿಯಲ್ಲಿ ಪಿರ್ಯಾದಿರವರ ತಂದೆ ಬೈಕ್ ನಿಂದ ಬಿದ್ದು ಮೃತಪಟ್ಟಿರುತ್ತಾರೆಂದು ಹೇಳಿ ಹೆಮ್ಮಿಗೆ ಗ್ರಾಮದ ವಾಸಿ ಪಿರ್ಯಾದಿರವರು ನೀಡಿದ ದೂರಿನ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ಸರಹದ್ದು ಕನಕ ಭವನ ಬಳಿಯಲ್ಲಿ ಪಿರ್ಯಾದಿರವರ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಹುಲ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಮಲ್ಕುಂಡಿ ವಾಸಿಯು ಅಪ್ರಪ್ತಾವಯಸ್ಸಿನ ಯುವತಿಯನ್ನು ವಿವಾಹವಾಗ ಗರ್ಭವತಿಯನ್ನಾಗಿ ಮಾಡಿದ ಮೇರೆಗೆ ಪ್ರಕರಣವನ್ನು ದಾಖಲಿಸಲು ಸುಶೀಲ ಸಿ ಬಿ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ನಂಜನಗೂಡು ರವರು ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಟಿ ನರಸೀಪುರ ಪೊಲೀಸ್ ಠಾಣಾ ಸರಹದ್ದು ಕುರುಬೂರು ಸರ್ಕಾರಿ ಶಾಲೆ ಬಳಿಯಲ್ಲಿ ಪಿರ್ಯಾದಿ ರವರ ಮಗನಿಗೆ ಅಪಘಾತವಾಗಿ ಮೃತಪಟ್ಟಿರುತ್ತಾರೆಂದು ಹೇಳಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಪಿರಿಯಾಪಟ್ಟಣ ಪೊಲೀಸ್ ಠಾಣಾ ಸರಹದ್ದು ವಿ ಜಿ ಕೊಪ್ಪಲು ಗ್ರಾಮದಲ್ಲಿ ಪಿರ್ಯಾದಿ ರವರ ಬಾಬ್ತು ಸುಮಾರು 50 ಗ್ರಾಂ ತೂಕದ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡು ಹೋದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.
ಹುಣಸೂರು ಗ್ರಾಮಾಂತರ ಸರಹದ್ದು ಚುಂಚನಕಟ್ಟೆ ರಸ್ತೆಯಲ್ಲಿ ಪಿರ್ಯಾದಿರವರ ಗಂಡನಿಗೆ ಎದುರಿನಿಂದ ಬಂದ ಬೈಕ್ ನ ಸವಾರ ತನ್ನ ಬೈಕನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಢಿಕ್ಕಿ ಮಾಡಿದ್ದರಿಂದ ಪಿರ್ಯಾದಿರವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತದೆ.