ಪ್ರಿಯ ನಾಗರಿಕ ಬಂಧುಗಳೆ :-ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ, ಅಪರಾಧ ಪತ್ತೆಗೆ ಸಹಕರಿಸಿ- ಸಂಚಾರಿ ನಿಯಮವನ್ನು ಪಾಲಿಸಿ- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ-ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ- ವಾಹನ ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ- ಅಪ್ರಾಪ್ತ ವಯಸ್ಸಿನ ಮಕ್ಕಳು ಚಾಲನಾ ಪರವಾನೆಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ-ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ-ಬೆಲೆ ಬಾಳುವ ಆಭರಣಗಳನ್ನು ಪ್ರದರ್ಶಿಸಬೇಡಿ
ಮೈಸೂರು ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ನಿಮ್ಮ ಹಾಗೂ ನಿಮ್ಮ ಹಳ್ಳಿ, ನಗರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು, ಸಮಸ್ಯೆ, ಸಲಹೆ ಹಾಗೂ ಮಾಹಿತಿಗಳಿದ್ದಲ್ಲಿ ಈ ಕೆಳಕಂಡ PHONE AND ADDRESS ನಲ್ಲಿರುವ ದೂರವಾಣಿಗೆ ತಿಳಿಸುವುದರ ಮೂಲಕ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರು

Thursday, August 21, 2025

ದೈನಂದಿನ ಅಪರಾಧಗಳ ಮಾಹಿತಿ 21.08.2025

 ಕೆ ಆರ್‌ ನಗರ ಪೊಲೀಸ್‌ ಠಾಣಾ ಸರಹದ್ದು ಟೌನಿನ ನಿವಾಸಿ ಪಿರ್ಯಾದಿಯವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಪಕ್ಕದಲ್ಲಿ ಬೆಳೆದಿದ್ದ ಗಂಧದ ಮರವನ್ನು ಕಳ್ಳತನ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಸಾಲಿಗ್ರಾಮ ಪೊಲೀಸ್‌ ಠಾಣಾ ಸರಹದ್ದು ಕುಪ್ಪೆ ಗ್ರಾಮದ ಪಿರ್ಯಾದಿಯವರ ಮಗಳು  ಕಾಣೆಯಾಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಸಾಲಿಗ್ರಾಮ ಪೊಲೀಸ್‌ ಠಾಣಾ ಸರಹದ್ದು ಮೇಲೂರು ಗ್ರಾಮದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಮನೆಯಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳ್ಳತನ  ಮಾಡಿರುತ್ತಾರೆ ಅದರ ಬೆಲೆ ಸುಮಾರು 1,42,000/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ಚಿಲ್ಕುಂದ ಗ್ರಾಮದಲ್ಲಿ ಯಾರೋ ಕಳ್ಳರು ದೇವಾಸ್ಥನದಲ್ಲಿ ಗೋಲಕಗಳನ್ನು ಹೊಡೆದು   ಚಿನ್ನ ಹಾಗೂ ನಗದನ್ನು ಕಳ್ಳತನ  ಮಾಡಿರುತ್ತಾರೆ ಅದರ ಬೆಲೆ ಸುಮಾರು 17,500/- ರೂ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತಾರೆ.

ಆಂತರಸಂತೆ ಪೊಲೀಸ್‌ ಠಾಣಾ ಸರಹದ್ದು ಎನ್‌ ಬೇಗೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಆಂದರ್‌ - ಬಾಹರ್‌ ಇಸ್ಪೀಟ್‌ ಆಟವಾಡುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್‌ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 10,300/- ರೂ ಹಣವನ್ನು ವಶಪಡಿಸಿಕೊಂಡು  09 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.

ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದು ನಲ್ಲೂರುಪಾಲ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಆಂದರ್‌ - ಬಾಹರ್‌ ಇಸ್ಪೀಟ್‌ ಆಟವಾಡುತ್ತಿದ್ದು ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪಿಎಸ್‌ ಐ ಹಾಗೂ ಸಿಬ್ಬಂದಿಗಳು ದಾಳಿಮಾಡಿ 30,080/- ರೂ ಹಣವನ್ನು ವಶಪಡಿಸಿಕೊಂಡು  09 ಜನರ ಮೇಲೆ ಪ್ರಕರಣ ದಾಖಲಿಸಿರುತ್ತಾರೆ.

No comments:

Post a Comment

NOTICE

ಸಾರ್ವಜನಿಕರಲ್ಲಿ ಮನವಿ

ಪೊಲೀಸರು ಇರುವುದು ನಿಮ್ಮ ಸೇವೆ ಹಾಗೂ ರಕ್ಷಣೆಗಾಗಿ, ಅಪರಾಧವನ್ನು ಶಿಕ್ಷಿಸಲು, ಅಪರಾಧಿಯನಲ್ಲ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಎತ್ತಿಹಿಡಿಯಲು ಸುರಕ್ಷಿತ ಸಮಾಜ ನಿರ್ಮಾಣ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ನಮ್ಮೊಂದಿಗೆ ಕೈ ಜೋಡಿಸಿ.

ಮಾಹಿತಿ ಫಲಕವನ್ನು ತಪ್ಪದೇ ಓದಿ ಮತ್ತು ಪಾಲಿಸಿ ಹಾಗೂ ಇತರರಿಗೂ ತಿಳಿಸಿ.

ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು

CRIME PREVENTION

CRIME PREVENTION
ಅಪರಾಧ ತಡೆ